Video of the Leader of the opposition in the legislative council <br />K.S. Eshwarappa viral on social media. In a party workers meeting Koppal <br />K.S. Eshwarappa said that, party workers never to hesitate from bluffing <br />to voters to win political support. <br /> <br />ಕರ್ನಾಟಕ ಬಿಜೆಪಿಯಲ್ಲಿ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿ ಮಾಡುವವರು <br />ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ. ಕಳೆದ ವಾರ ಅವರು ನೀಡಿರುವ ಹೇಳಿಕೆ <br />ಬಗ್ಗೆ ಈಗ ಚರ್ಚೆ ನಡೆಯುತ್ತಿದೆ.ಸಾಮಾಜಿಕ ಜಾಲತಾಣಗಳಲ್ಲಿ ಕೆ.ಎಸ್.ಈಶ್ವರಪ್ಪ ಅವರ <br />ಹೇಳಿಕೆ ಚರ್ಚೆ ನಡೆಯುತ್ತಿದೆ. ಪರ-ವಿರೋಧ ಕಮೆಂಟ್ಗಳು ಹರಿದಾಡುತ್ತಿವೆ. ಆದರೆ, <br />ಈಶ್ವರಪ್ಪ ಅವರು ಈ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.ಈಶ್ವರಪ್ಪ <br />ಹೇಳಿದ್ದೇನು? : ಗಂಗಾವತಿ ತಾಲೂಕಿನ ಕಾಟರಗಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ <br />ಸಮಾವೇಶದಲ್ಲಿ ಮಾತನಾಡಿದ ಈಶ್ವರಪ್ಪ ಅವರು, 'ಬಿಜೆಪಿ ಸಾಧನೆಯ ಬಗ್ಗೆ ಏನೂ ಗೊತ್ತಿಲ್ಲ <br />ಎಂದರೆ ಸುಳ್ಳನಾದರೂ ಹೇಳಿ' ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದ್ದಾರೆ.'ಹಿಂದೆ <br />ಬಿಜೆಪಿ ಸರ್ಕಾರವಿದ್ದಾಗ ನಾವು ಏನು ಮಾಡಿದ್ದೆವು. ಮುಂದೆ ಗೆದ್ದರೆ ಏನು ಮಾಡುತ್ತೇವೆ <br />ಎಂಬುದು ಎಲ್ಲಾ ಕಾರ್ಯಕರ್ತರಿಗೆ ತಿಳಿದಿರಬೇಕು. ಕೇಂದ್ರ ಸರ್ಕಾರದ ಸಾಧನೆ ಏನು ಎಂಬುದು <br />ತಿಳಿದುಕೊಂಡಿರಬೇಕು. ಇವುಗಳು ತಿಳಿದಿಲ್ಲ ಎಂದರೆ ಸುಳ್ಳನಾದ್ರು ಹೇಳಿ' ಎಂದು ಈಶ್ವರಪ್ಪ ಸಭೆಯಲ್ಲಿ ಹೇಳಿದ್ದಾರೆ.